ಪರಿಸರ ಉಳಿಸಿ – ಬೆಳೆಸಿ – ಶ್ರೀ ಚಿನ್ನಪ್ಪ ಗೌಡ ಕ

ಉತ್ತಮ ಪರಿಸರ ನಮ್ಮ ಅವಶ್ಯಕತೆ. ಹೀಗಾಗಿ ಪರಿಸರ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಕ್ಷೇತ್ರ ಶಿಕ್ಷಣ ಸಂಯೋಜಕ ಶ್ರೀ ಚಿನ್ನಪ್ಪ ಗೌಡ ಹೇಳಿದರು.
ಇಲ್ಲಿನ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ 14-06-2013ರಂದು 2013-14ನೇ ಸಾಲಿನ ‘ಸ್ನೇಹ ಇಕೋ ಕ್ಲಬ್’ ಇದರ ಕಾರ್ಯಚಟುವಟಿಕೆಗಳ ಉದ್ಘಾಟನೆ ಮಾಡಿದ ಅವರು, ಇದಕ್ಕೆ ಪೂರಕವಾಗಿರುವ ಶಿಕ್ಷಣದ ಅವಶ್ಯಕತೆಯನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ವಿತರಣೆ ನಡೆಯಿತು. ನಂತರ ಡೆಂಗಿ-ಜ್ವರದ ಕುರಿತು ಮಾಹಿತಿಯನ್ನು ಡಾ. ವೆಂಕಟೇಶ್ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಶ್ಮಿ ದಾಮ್ಲೆ ವಹಿಸಿದ್ದು ಇಕೋ ಕ್ಲಬ್ ಅಧ್ಯಕ್ಷ ಆದಿತ್ಯ ಕೇಶವ್(ಹತ್ತನೇ ತರಗತಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಲಬ್‍ನ ನಿರ್ದೇಶಕ  ಶ್ರೀ ರಘುರಾಮ ಭಟ್ ಸಿ ಪ್ರಾಸ್ತಾವಿಕ ಮಾತನ್ನಾಡಿದರು. ಸಂಪ್ರೀತ್(ಹತ್ತನೇ ತರಗತಿ)  ಸ್ವಾಗತಿಸಿ, ವಿಜೇತ್(ಹತ್ತನೇ ತರಗತಿ)  ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಸುದೀಪ್ ನಾರಾಯಣ್(ಹತ್ತನೇ ತರಗತಿ) ನಿರೂಪಿಸಿದರು.

ನಿಮ್ಮ ಟಿಪ್ಪಣಿ ಬರೆಯಿರಿ